Monday, November 9, 2009

ಹಿಂದೊಂದು ಕಾಲ ಇತ್ತು.... ಟಿ.ವಿ.ಲಿ ಸಿನಿಮಾ ಲಿ ಕಥೆ ಲಿ ಕೇಳ್ತಾ ಇದ್ವಿ..... ಮುಂದೊಂದು ದಿನ ಬರತ್ತೆ, ಸಂಬಂಧಗಳಿಗೆ ಅರ್ಥ ಇರಲ್ಲ... ಗಂಡ ಹೆಂಡತಿ ನ ಹೆಂಡತಿ ಗಂಡನ್ನ ಕೊಲೆ ಮಾಡ್ಸೋ ಕಾಲ.... ತಾಯಿ ಮಗನ, ಮಗ ತಂದೆ ನ ನಂಬದೆ ಇರೋ ಕಾಲ.... ಜಗತ್ತಲ್ಲಿ ಪಾಪಿಗಳೇ ತುಂಬಿ ಹೋಗ್ತಾರೆ....ಆಗ ಭಗವಂತ ಮತ್ತೆ ಅವತಾರ ಎತ್ತಿ ಬರ್ತಾನೆ ಲೋಕದಲ್ಲಿ ಅನೀತಿ ಅಶಾಂತಿ ಅಧರ್ಮ ಅಳಿಸಿ ಶಾಂತಿ ನೆಮ್ಮದಿ ತಂದ್ಕೊಡ್ತಾನೆ ಅಂತ....ಯೋಚಿಸಿ ನೋಡಿದ್ರೆ ನಿಮಗೆ ಆ ಕಾಲ ಇನ್ನು ಬರಬೇಕು ಅನಿಸ್ತ ಇದೇನಾ??? .... ಆಗ್ಲೇ ಬಂದಾಗಿದೆ.... ಆದ್ರೆ ಶಾಂತಿ ನೆಮ್ಮದಿ ತಂದುಕೊಡೋ ಭಗವಂತ ಯಾವಾಗ ಬರ್ತಾನೋ ತಿಳಿತಿಲ್ಲ.... ಮೊನ್ನೆ ಮೊನ್ನೆ ಕೇಳಿದ್ವಲ್ಲ, ಗಂಡ ಹೆಂಡತಿ ಮತ್ತು ಮಗು ಕೊಲೆ ಆಗಿದ್ದು.... ಮಾಡಿದ್ದೂ ಯಾರು ಅಲ್ಲ, ಅವ್ನ ಮನೆ ಕೆಲಸದ ಆಳು.... ಸ್ವಾಮಿ ಭಕ್ತಿಗೆ ಹೆಸರಾದ ದೇಶ ನಮ್ದು.... ಆದ್ರೆ ಈಗ ನಡಿತಿರೋದು ಏನು... ನಿಮಗೊಂದು ವಿಷ್ಯ ಹೇಳ್ತೀನಿ... ಹಿಂದಿನ ಕಾಲದಲ್ಲಿ ರಾಜರು ತಮ್ಮ ಅಂತಃಪುರದಿಂದ ಸುರಂಗ ತೊಡಿಸ್ತ ಇದ್ರೂ... ಎಮರ್ಜೆನ್ಸಿ ಲಿ ಕೆಲ್ಸಕ್ಕೆ ಬರತ್ತೆ ಅಂತ... ಯಾವ್ದಾದ್ರು ಶತ್ರು ಪಡೆ attack ಮಾಡ್ದಾಗ ಪ್ರಯೋಜನ ಆಗತ್ತೆ ಅಂತ... ಆ ಸುರಂಗ ತೋಡೋ ವ್ಯಕ್ತಿ, ಅವ್ನ teamಮತ್ತು ರಾಜಂಗೆ ಮಾತ್ರ ತಿಳಿತ ಇತ್ತು ಆ ಸುರಂಗದ ಬಗ್ಗೆ.... ಸುರಂಗದ ಕೆಲಸ ಎಲ್ಲ ಮುಗಿದ ಮೇಲೆ ಆ ವ್ಯಕ್ತಿ ಮತ್ತು ಅವ್ನ team suicide ಮಾಡ್ಕೋತ ಇದ್ರು.... ಸುರಂಗದ ವಿಷ್ಯ ಬೇರೆಯವರಿಗೆ ತಿಳಿದೇ ಇರ್ಲಿ ಅಂತ.... ರಾಜನ ಮೇಲಿನ ಭಯಕ್ಕಿಂತ ಇಲ್ಲಿ ರಾಜ ಭಕ್ತಿ ಹೆಚ್ಚು ಕೆಲಸ ಮಾಡತ್ತೆ... ಸುರಂಗ ಮುಗಿದ ಮೇಲೆ ತಾನು ಸಾಯ್ತೀನಿ ಅಂತ ತಿಳಿದರು ಕೂಡ ಆ ವ್ಯಕ್ತಿ ಅಲ್ಲಿ ಕೆಲಸ ಮಾಡ್ತಾ ಇದ್ದ... ಇಂತದೊಂದು ಅವಕಾಶ ಸಿಕ್ಕಿದ್ದು ತನ್ನ ಪುಣ್ಯ ಅಂತ ಭಾವಿಸ್ತ ಇದ್ದ...ಆದ್ರೆ ಈಗ ..... ಕೆಲಸ ಕೊಟ್ಟ ಧಣಿ ತನ್ನ ಕೆಲಸಗಾರನಿಂದ ಕೊಲೆ ಆಗ್ತಾನೆ... ಮುದ್ದು ಮುದ್ದಾಗಿ ಓಡಾಡಿಕೊಂಡಿದ್ದ ಅವ್ನ ಮಗು ಹೆಣವಾಗತ್ತೆ.... ಜೀವನ ಪೂರ್ತಿ ಜೊತೆಯಾಗಿ ಬಾಳಲು ಬಂದ ಅವ್ನ ಹೆಂಡತಿ ರಕ್ತದ ಮಡುವಲ್ಲಿ ಮಲಗ್ತಾಳೆ... ಮೊನ್ನೆ ಒಂದು news ನೋಡ್ದೆ... ತಾಯಿ suicide ಮಾಡ್ಕೊಂಡ್ಲು ಅಂತ... ಕಾರಣ ಗೊತ್ತ ನಿಮಗೆ... ಅವಳ lover ಜೊತೆ ಅವಳ ಮಗಳು ಓಡಿಹೋದಳು ಅಂತ... ಸಂಬಂಧ ಗಳಿಗೆ ಅರ್ಥ ಇಲ್ಲ... ಹೊರಗಡೆ ಹೋದ ಮಗು ಸೇಫ್ ಆಗಿ ವಾಪಾಸ್ ಬಂದ್ರೆ ತಾಯಿ ಖುಷಿ ಪಡ್ತಾಳೆ... ಯಾಕಂದ್ರೆ ಹೊರಗಡೆ ಹೋಗೋ ಯಾರೇ ಅದ್ರು ಸೇಫ್ ಆಗಿ ವಾಪಾಸ್ ಬರೋ ನಂಬಿಕೆ ತುಂಬ ಕಮ್ಮಿ ಆಗಿದೆ... ಮನುಷ್ಯ ಎಲ್ಲಿ ಎಡಿವಿದ ಅಂತ ವಿಚಾರ ಮಾಡಬೇಕಾಗಿದೆ...ಅದಕ್ಕಿಂತ ಹೆಚ್ಚಾಗಿ ಕೆಟ್ಟಿರೋ ಜನರನ್ನ ಸರಿ ಮಾಡಬೇಕಾಗಿದೆ... ಇದು ಆಗೋ ವಿಚಾರ ಅಲ್ಲ ಅಂತ ಎಲ್ರಿಗೂ ಗೊತ್ತು...

ನಮ್ಮ ಪೂರ್ವಿಕರು ಎಲ್ಲದಕ್ಕೂ ಒಂದು ಬೇಲಿ ಅಂತ ಹಾಕಿದ್ದರು... ಆಗ ಎಲ್ಲ ಸರಿಯಾಗಿತ್ತು.... ರೀತಿ ನೀತಿ ಅಂತ ನೋಡ್ತಾ ಇದ್ರು... ಯಾರು ಏನ್ ಮಾಡಬೇಕು ಯಾರ್ಯಾರು ಹೇಗ್ ಇರ್ಬೇಕು ಅಂತ ತಿಳಿಸ್ತಿದ್ರು.... ಮೂಢನಂಬಿಕೆ ಕೂಡ ಕೆಲವು ಇದ್ವು ಆದ್ರೆ ಅದಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ನೆಮ್ಮದಿ ಇತ್ತು... ಸಂಬಂಧಕ್ಕೆ ಅರ್ಥ ಇತ್ತು ಬೆಲೆ ಇತ್ತು.... ಆದ್ರೆ ಈಗ ನಾವು ಹೈ ಎಂಡ್ ಸೊಸೈಟಿ ಲಿ ಎಷ್ಟು ಬೆಳ್ದಿದೀವಿ ಅಂದ್ರೆ ಮದುವೆ ಆದ ಮೇಲೆ ನಡಿಯೋ ಸಮಾಚಾರ ಎಲ್ಲ ಈಗ ಪಬ್ಲಿಕ್ ಆಗೋಗಿದೆ... ಇಬ್ರು ಹುಡುಗರು ಇಲ್ಲ ಇಬ್ರು ಹುಡುಗಿಯರು ಸೇರಿದ್ರೆ ಬಹುಷಃ ಈ ವಿಷ್ಯ ಬಂದ್ರು ಬರತ್ತೆ... ನಿಸ್ಸಂಕೋಚವಾಗಿ ಅದ್ರ ಬಗ್ಗೆ ನಾವು ಮಾತಾಡುವಷ್ಟು ಬೆಳ್ದಿದೀವಿ... ನಿಮಗೆ ನೆನಪಿದೇನೋ ಏನೋ ಗೊತ್ತಿಲ್ಲ... whisper ಮೊದಲ ಸಲ ಮಾರ್ಕೆಟ್ ಗೆ ಬಂದಾಗ ಅದ್ರ ಬಗ್ಗೆ advertise ಮಾಡೋಕು ಕೂಡ ಸಂಕೋಚ ಪಟ್ಟಿದ್ರು.... ರೇಣುಕ ಸಹಾನೆ ಬಂದು " ನಿಮಗೆ ಒಂದು ವಿಷ್ಯ ಹೇಳೋದಿದೆ.. ಆದ್ರೆ ಹೇಗೆ ಹೇಳಲಿ ಅಂತ ತಿಳೀತಿಲ್ಲ" ಅಂತ ಸಂಕೋಚದಿಂದ advertise ಮಾಡಿದ್ದು ಇನ್ನು ನೆನಪಿದೆ... ಆದ್ರೆ ಈಗ IPL ಇಂದ ಹಿಡಿದು I-Pill ನ ವರೆಗೂ ಮಾತಾಡುವಷ್ಟು ಸೊಸೈಟಿ ಬೆಳದಿದೆ... ಕಾಲ ಕೆಟ್ಟಿಲ್ಲ.... ಜನ ಕೆಟ್ಟಿದಾರೆ.... technology ಬೆಳಿತಾ ಬೆಳಿತಾ ಮನುಷ್ಯ ತನಗಿಂತ ಮಿಗಿಲಾದದ್ದು ಬೇರೆ ಏನು ಇಲ್ಲ ಅನ್ಕೊಂಡಿದಾನೆ.... ಆದ ಹೊಸ ಅವಿಷ್ಕಾರನೆಲ್ಲ personal benifit ಗೆ ಬಳಸ್ಕೋತ ಇದಾನೆ... ಮನುಷ್ಯಂಗೆ ಇರೋ ಒಂದು big problem ಅಂದ್ರೆ ದುರಾಸೆ... ಎಷ್ಟೂ ಸಾಲದು ಅನ್ನೋ ಮನೋಭಾವ... ಅದು ಹೋಗೋ ತನಕ 80% problem solve ಆಗಲ್ಲ.... ಆಗೆಲ್ಲ ದುರಾಸೆ ಅನ್ನೋದು ತುಂಬ ದೂರದ ಮಾತು ಅನ್ನೋ ಹಾಗಿತ್ತು... ಮನೇಲಿ ಒಂದು ಮದುವೆ ಆದ್ರೆ ಊರವರೆಲ್ಲ ಮನೆಗೊಬ್ಬರಂತೆ ಬಂದು ಕೆಲಸ ಮಾಡ್ತಾ ಇದ್ರು... ಭತ್ತ ಕುಟ್ಟೋದು ಕಾರದ ಪುಡಿ ಮಾಡೋದು ಬೇಳೆ ಸೋಸಿಡೋದು ಹುಣಸೆ ಹಣ್ಣು ಮುದ್ದೆ ಮಾಡೋದು ಅದು ಇದು ಅಂತ ಸಾಕಷ್ಟು ಕೆಲಸ ಕಾರ್ಯದಲ್ಲಿ ಭಾಗಿ ಆಗ್ತಾ ಇದ್ರು .... ಈಗಿನ ವಿಚಾರ ನಿಮಗೆ ಹೇಳಬೇಕಾಗಿಲ್ಲ... ಮನೆ ಮಂದೀನೇ ಅವತ್ತಿನ ದಿನ ಬಂದು ತಿಂದು ಟಾಟಾ ಮಾಡಿ ಹೋಗ್ತಾರೆ....ಹೀಗಿರುವಾಗ ಒಗ್ಗಟ್ಟು ಅನ್ನೋ ಪದ ಎಲ್ಲಿ ಬರತ್ತೆ... so ಅದೊಂದು ಪದ out.... ಹಾಗಂತ ಹಿಂದೆ ದುರಾಸೆ ಇರ್ಲಿಲ್ಲ ಒಗ್ಗಟ್ಟು ಜಾಸ್ತಿ ಇತ್ತು ಕೆಟ್ಟದ್ದು ಅನ್ನೋದು ಇರಲೇ ಇರ್ಲಿಲ್ಲ ಅಂತ ನಾನು ಹೇಳ್ತಾ ಇಲ್ಲ ಆದ್ರೆ percentage ಕಮ್ಮಿ ಇತ್ತು.... ಈಗ ಅದ್ರ ಉಲ್ಟಾ ಆಗಿದೆ.... ಪ್ರಪಂಚಕ್ಕೆ ಬೇಲಿ ಹಾಕೋಕೆ ಒಬ್ಬ ಕೃಷ್ಣ ಬರಬೇಕಿದೆ...ಬರೀತಾ ಕೂತರೆ 200 ಪೇಜ್ ಆದರು ಮುಗಿದೇ ಇರೋ ಬ್ಲಾಗ್ ಇದು... ಸದ್ಯಕ್ಕೆ ಮುಗ್ಸೋಣ...

No comments:

Post a Comment