Thursday, December 10, 2009

ಕುರುಡು ಕಾಂಚಾಣ ಕುಣಿಯುತಲಿತ್ತು....

ಕೇಳಿದೀರಾ ಅನ್ಕೋತೀನಿ ಈ song ನ.... ಕುರುಡು ಕಾಂಚಾಣ ಕುಣಿಯುತಲಿತ್ತು ಕಾಲಿಗೆ ಬಿದ್ದೋರ ತುಳಿಯುತಲಿತ್ತು.... ಹಿರಿಯರ ಅನುಭವ ಎಷ್ಟಿತ್ತು ಅನ್ನೋದಕ್ಕೆ ಇದೇ ಸಾಕ್ಷಿ... ಜಗತ್ತಲ್ಲಿ ಏನೇ ನಡೆದಿದ್ರೂ ಅದು "ಹೆಣ್ಣು, ಹೊನ್ನು, ಮಣ್ಣು" ಈ ಮೂರು ಬಿಟ್ಟು ಬೇರೆ ವಿಷಯಕ್ಕಲ್ಲ... ಹಾಗೆ ಆ ಮೂರರ ಮೇಲೆ ಅತಿಯಾದ ಮೋಹ ಇಟ್ಟು ನಡೆದವ ಮತ್ತೆ ಹಿಂದೆ ಬಂದಿಲ್ಲ... ಉಳಿದೂ ಇಲ್ಲ ಅನ್ನಿ... ನಡೆಯುತ್ತಿರೋ ವಿದ್ಯಮಾನ ಗಮನಿಸಿದರೆ ನಮ್ಮೆಲ್ಲಾ ಕವಿಗಳು ಕೂಡ ಒಂದಾನೊಂದು ಕಾಲದ ಅರಿಸ್ಟಾಟಲ್ ಅಥವಾ ನಾಸ್ಟ್ರಡಾಮಸ್ ಅನ್ಸಲ್ವಾ ನಿಮಗೆ.... ??? ಯಾಕೆ ಹೇಳ್ತೀನಿ ಅಂದ್ರೆ ಆಗಿನ ಎಲ್ಲ ಕವನ ತಗೊಂಡ್ರೆ ಈಗ ನಡೀತಾ ಇರೋ incidents ಗೆ ತುಂಬ ಸುಲಭವಾಗಿ ಲಿಂಕ್ ಮಾಡ್ಬೋದು... ಅನ್ವೇಷಣೆಯ ಹಾದಿಯಲ್ಲಿ ತನ್ನನ್ನು ತಾನು ಕಳಕೊಂಡ ಮನುಷ್ಯ ತಿರಿಗಿ ನೋಡಲಾಗದಷ್ಟು ಮುಂದೆ ಮುಂದೆ ಸಾಗಿ ಬಂದುಬಿಟ್ಟ... ಮಾಡುತ್ತಿರುವ ಹೊಸ ಹೊಸ experiments ಆಗ್ತಾ ಇರೋ ಹೊಸ ಹೊಸ inventions ತನಗೆ, ಪ್ರಕೃತಿಗೆ ಮತ್ತು ಈ ಇಡೀ ವಿಶ್ವಕ್ಕೆ ಎಷ್ಟರ ಮಟ್ಟಿಗೆ ಅವಶ್ಯಕ ಮತ್ತು ಅದರಿಂದ ಆಗೋ side effects ಏನು ಅನ್ನೋದು ಕೂಡ ಯೋಚಿಸದ ಮಟ್ಟಿಗೆ ಬೆಳೆದು ನಿಂತ... ಹಿಂದಿದ್ದ ಊರು ಈಗಿಲ್ಲ... ಹಿಂದಿದ್ದ ಗಾಳಿ? ಮರೆತು ಬಿಡಿ ಅದರ ಬಗ್ಗೆ... ಮರಗಳೆಲ್ಲ ಅಮರವಾಗಿ ಹೋದವು... ತಾಯಿ ತಾನೆ ಭೂಮಿ ಎಂದು ಅಗೆದು ಅಗೆದು ಹೆತ್ತ ಒಡಲಿಗೆ ಚೂರಿಯಿಟ್ಟ.... ಆಗಿದ್ದ ಕಾಡು ಈಗಲೂ ಇದೆ.... ಒಂದೇ ವ್ಯತ್ಯಾಸವೆಂದರೆ ಕಾಂಕ್ರೀಟ್.... ಕಾಂಕ್ರೀಟ್ ಕಾಡಿನ ಮಧ್ಯದಲ್ಲಿ ತುಂಬಿ ಹರಿಯುತ್ತಿರುವ ವೃಷಭಾವತಿಯಲ್ಲಿ ಮಿಂದು ಪುನೀತರಾಗಿರುವ ಪರಮ ಪಾವನರು ನಾವು... ಬೇಕಿತ್ತು ಅಲ್ವ ನಮಗೆ ಇದು...



ಕಳೆದ ವರ್ಷ.... ಬೆಂಗಳೂರೆಂಬ ಬೆಂಗಳೂರೇ ನಡುಗಿ ತಲ್ಲಣಗೊಂಡಿತ್ತು..... ಅದೆಲ್ಲೋ ಹಾಕಿದ atom bomb ಗೆ ಇಲ್ಲಿನ ಜನ ಸಾಯುವಂತೆ... ಎಲ್ಲೆಲ್ಲೂ ಕೇಳಿ ಬರ್ತಾ ಇದ್ದ ಒಂದೇ ಪದ "Recession".... ರಾತ್ರೋ ರಾತ್ರಿ ಜನ ಬೀದಿಗೆ ಬಂದರು, ಮನೆಗಳು ಕಾಲಿಯಾದವು, "House To-Let" ಎಂಬ ಬೋರ್ಡುಗಳು ನೇತಾಡತೊಡಗಿದವು, ಬಾಡಿಗೆ ಕಮ್ಮಿ ಆಯಿತು... ಕೇಳಿದ್ರೆ ಬರೋ ಉತ್ತರ " IT-BT ಬಿದ್ದೊಗೈತಲ್ವ ಅದಿಕ್ಕೆ ನಾವು ಬಾಡಿಗೆi ಇಳ್ಸಿದೀವಿ".... ಆಟೋಗಳು ಟ್ಯಾಕ್ಸಿಗಳು ಕಾಲಿ ಕಂಡವು.... amusement parks ಕಾಲಿ ಹೊಡ್ಯೋಕೆ ಶುರು ಆಯಿತು, ಪಬ್- ಬಾರ್ -ರೆಸ್ಟೋರೆಂಟ್ -ಶಾಪಿಂಗ್ ಮಾಲ್ - ಈಟ್ ಔಟ್ ಎಲ್ಲೆಲ್ಲು ನೊಣ ಹಾರೋಕೆ ಶುರು ಆಯಿತು.... ವ್ಯಾವಹಾರಿಕ ಲೋಕದ ದೊಡ್ಡಣ್ಣನೆಂದೇ ಪ್ರ(ಕು)ಖ್ಯಾತಿ ಪಡೆದ ಅಮೇರಿಕಾ ಎಂಬ ಕೆಲವೇ ನೂರು ವರ್ಷದ ಇತಿಹಾಸ ಇಟ್ಕೊಂಡಿರೋ ಪುಟ್ಟ ನಾಡಿನಲ್ಲಿ ಆದ ಮಿಂಚಿನಂಥ ಸಂಚಲನ ಸಾವಿರಾರು ವರ್ಷದ ಭವ್ಯ ಬುನಾದಿ ಇರೋ ಭಾರತ ಎಂಬ ದೇಶಾನ ನಡಗಿಸೋಕೆ ಶುರು ಮಾಡ್ತು..... ಇದರ ಪ್ರಭಾವ ಎಷ್ಟಿತ್ತು ಅಂದ್ರೆ Government employee ಅಂದ್ರೆ ಮೂಗು ಮುರಿತಾ ಹುಡುಗೀರೆಲ್ಲ Government employees ಕಡೆ ನೋಡೋಕೆ ಶುರು ಮಾಡಿದ್ರು... ಹುಡುಗಂಗೆ Wipro ಲಿ ಕೆಲಸ IBM ಲಿ ಕೆಲಸ ಅಂತ ಸೆಟ್ ಆಗಿದ್ದ ಮದುವೆಗಳೆಲ್ಲ ಮುರಿದು ಬಿದ್ದವು... "ಬಡ್ಡಿ ಮಕ್ಳು ಮೆರಿತ ಇದ್ರು ಸರ್ಯಾಗಿ ಆಯಿತು..... ಅಂತ the so called government employees ಸಮಾಧಾನ ಪಟ್ಟುಕೊಳ್ಳುವ ಹಾಗೆ ಆಯಿತು... ಒಂದು ರೀತಿಲಿ ಯಾರದು ತಪ್ಪಿಲ್ಲ ಇದ್ರಲ್ಲಿ.... ಸಾಫ್ಟ್ ವೇರ್ ಹುಡುಗ, ಕೈ ತುಂಬ ಸಂಭಳ ಅಂತ ಸರ್ಕಾರಿ ಉದ್ಯೋಗಿಗಳ ಕಡೆ ತಿರಿಗಿಯು ನೋಡದ ಹುಡುಗೀರು ಈಗಲೂ ಇದಾರೆ ನಮ್ಮಲ್ಲಿ.... ಇದೇ ಕಾರಣಕ್ಕೆ ಇವತ್ತು 30-32 ಆದರೂ ಮದುವೆಯಾಗದ ಹುಡುಗರೂ ಇದಾರೆ ನಮ್ಮಲ್ಲಿ...... ಅಂತ ನೊಂದ ಜೀವಗಳಿಗೆ ಇಂಥ ಸನ್ನಿವೇಶ ಕೊಂಚ ಸಮಾಧಾನ ತಂದು ಕೊಟ್ಟಿರಲಿಕ್ಕೆ ಸಾಕು....

ಮುಂಚೇನೇ ಹೇಳಿದ್ದೆ ನಿಮಗೆ , ಆಗ್ತಾ ಇರೋದೆಲ್ಲ ಹೆಣ್ಣು ಮಣ್ಣು ಹೊನ್ನಿಗಾಗಿ ಅಂತ.... ಅಮೇರಿಕಾ ಎಂಬ ಭವ್ಯ ಬ್ರಹ್ಮಾಂಡಲ್ಲೂ ನಡೆದದ್ದು ಇದೇ.... ಕಳೆದ 50 ವರ್ಷದಿಂದ home value pattern ನ ಸ್ಟಡಿ ಮಾಡಿದ ಬ್ಯಾಂಕುಗಳು ಹೊರ ತಂದಿದ್ದ report ಮಾತ್ರ ನಡುಕ ಹುಟ್ಟಿಸಿತ್ತು.... ಕಳೆದ ಐವತ್ತು ವರ್ಷದಲ್ಲಿ ಒಮ್ಮೆಯೂ ಕೂಡ ಮನೆಗಳ ಬೆಲೆ ಇಳಿಮುಖ ಕಂಡಿರಲಿಲ್ಲ..... ವ್ಯವಸ್ಥಿತವಾಗಿ ಹಾಕಿಕೊಟ್ಟ ಪರಿಧಿಯಂತೆ ಮುನ್ನುಗುತ್ತಿದ್ದ ಮನೆಗಳ ಬೆಲೆ ಅಲ್ಲಿನ ಬ್ಯಾಂಕುಗಳ ಕುತಂತ್ರ ಕಣ್ಣುಗಳಿಗೆ ಗುರಿಯಾಗಲು ಬಹಳ ಕಾಲ ಹಿಡಿಯಲಿಲ್ಲ... ಕೆಲಸವಿರಲಿ ಇಲ್ಲದಿರಲಿ, ಆಸ್ತಿ ಇರಲಿ ಇಲ್ಲದಿರಲಿ ಕೊನೆಗೆ ಅವನೊಬ್ಬ ನಿಷ್ಪ್ರಯೋಜಕ ಅಂತ ಗೊತ್ತಾದ್ರೂ ಕೂಡ ಸಾಲ ಕೊಡೋಕೆ ಮುಂದೆ ಬಂದವು... ಕಾರಣ ಇಷ್ಟೇ... ಏನೇ ಅದರೂ ಕಡೇ ಪಕ್ಷ ಆ ಮನೇನ ಮುಟ್ಟುಗೋಲು ಹಾಕಿಕೊಬೋದು ಆಗ ಕೊಟ್ಟ ಸಾಲಕ್ಕಿಂತ ಒಳ್ಳೆ ಬೆಲೆ ಬರೋ ಮನೆ ಸಿಗತ್ತೆ ಅನ್ನೋದೇ ಬ್ಯಾಂಕುಗಳ ಉದ್ದೇಶ... ಅದನ್ನ NINJA LOANS ಅಂತ ಕರೆದರು.... ನಂತರ ಬ್ಯಾಂಕುಗಳಿಂದ ಸಾಲಗಳನ್ನು ಖರೀದಿಸಿ ಅದನ್ನು ಮಾರುವ ಮಧ್ಯವರ್ತಿಗಳು ಹುಟ್ಟಿಕೊಂಡರು... ಒಬ್ಬನಿಗೆ ಸಾಲ ಕೊಟ್ಟರೆ ಅದನ್ನ ವಸೂಲಿ ಮಾಡೋಕೆ ಕನಿಷ್ಠ 10 ವರ್ಷ ಕಾಯಬೇಕು... ಅದನ್ನೇ ಮಧ್ಯವರ್ತಿಗಳಿಗೆ ಆ ಸಾಲಗಳನ್ನು ಮಾರಿದರೆ ಒಂದೇ ಸಲಕ್ಕೆ ತಾವು ಕೊಟ್ಟ ಸಾಲ ಎಲ್ಲ ವಾಪಸ್ ಬಂದು ಬಿಡತ್ತೆ.... ಈ ರೀತಿ ಬ್ಯಾಂಕುಗಳಿಂದ ಸಾಲ ಖರೀದಿಸಿದ ಮಧ್ಯವರ್ತಿಗಳು ಷೇರು ವ್ಯವಹಾರದಲ್ಲಿ ಹಣ ತೊಡಗಿಸೋಕೆ ಶುರು ಮಾಡಿದ್ರು.... ಒಮ್ಮೆಲೇ ಆದ ಬೆಳವಣಿಗೆಗಳಿಂದ ಷೇರು ಮಾರುಕಟ್ಟೆ ಲಿ ಧಿಡೀರ್ ಬದಲಾವಣೆ ಕಾಣಿಸ ಹತ್ತಿತು... ಆಗ ಕಂಪನಿಗಳು ಬಂದು ಷೇರು ಮಾರುಕಟ್ಟೇಲಿ invest ಮಾಡೋಕೆ ಶುರು ಮಾಡಿದವು... ಇಲ್ಲೇ ನೋಡಿ ನಿಜವಾದ "ಅಭಿವೃದ್ದಿ" ಕಾಣಿಸಿದ್ದು... ವಸೂಲಾಗದ ಸಾಲದಿಂದ ಮುಟ್ಟುಗೋಲು ಹಾಕಿದ ಮನೆಗಳ ಸಂಖ್ಯೆ ಬೆಳಿತಾ ಹೋಯ್ತು.... ಕೊನೆಗೆ ಮನೆಗಳನ್ನು ಕೊಳ್ಳೋರೆ ಇಲ್ಲವಾದರು... ಒಂದೇ ಸಲಕ್ಕೆ ಏರ್ತಾ ಇದ್ದ ಮನೆಗಳ ಬೆಲೆ ಬಿದ್ದು ಹೋಯ್ತು... ಷೇರು ಕುಸೀತು... ಕಂಪನಿಗಳು ಹಣ ಕಳೆದು ಕೊಂಡವು... ಆಗ್ಲೇ ಕಂಪನಿಗಳು ದಿವಾಳಿ ಅಂತ ಘೋಷಿಸಿದ್ದು... ಅಲ್ಲಿಂದ ಅದರ ಬಿಸಿ ಭಾರತಕ್ಕೆ ತಟ್ಟಿದ್ದು... ಇದೆಲ್ಲ ಈಗ ಇತಿಹಾಸ...

ಇಷ್ಟೆಲ್ಲಾ ಕಸರತ್ತು ಮಾಡಿ ಕೈ ಸುಟ್ಟುಕೊಂಡ ಅಮೇರಿಕಾ ಈಗ ಬುದ್ದಿ ಕಲ್ತಿದೆ... ಆದ್ರೆ ಈಗ ಅದರ ಸರಣಿ ದುಬೈ ಎಂಬ ಮಾಯಾನಗರಿಗೆ ಬಂದಿದೆ... ಜಗತ್ತಿನ ಸಂಪತ್ತೆಲ್ಲ ತನ್ನ ಒಡಲಲ್ಲೇ ಅಡಗಿದೆ ಎಂಬಂತೆ ಜನರನ್ನು ತನ್ನತ್ತ ಆಕರ್ಷಿಸುತ್ತಿದ್ದ ಮಾಯಾನಗರಿ ಈಗ ಹಣವಿಲ್ಲದೆ ಬೆತ್ತಲಾಗಿ ತನ್ನ ಬೆತ್ತಲನ್ನು ಮುಚ್ಚುವಂತೆ ಬೇಡುತ್ತಾ ಎತ್ತಲೋ ನೋಡುತ್ತಿದೆ... ಹಣದ ಬೆನ್ನತ್ತಿಹೋದ ಜನ ಪುಡಿಗಾಸಿಗೆ ಒದ್ದಾಡುವಂತಾಗಿದೆ... ತನ್ನತ್ತ ಕೈಚಾಚಿ ಬೇಟೆಯಾಡಿ ಬರುತ್ತಿದ್ದ ಮನುಷ್ಯರನ್ನು ನೋಡುತ್ತಿದ್ದ ಹಣ ಈಗ ಕೆಳಗೆ ಬಿದ್ದೋರನ್ನು ನೋಡಿ ಕಿಸ ಕಿಸ ನಗುತ್ತಿದೆ...

ಕುರುಡು ಕಾಂಚಾಣ ಕುಣಿಯುತ್ತಲಿದೆ..... ಕಾಲಿಗೆ ಬಿದ್ದೋರ ತುಳಿಯುತ್ತಲಿದೆ.......